![]() |
![]() |
![]() |
![]() |
![]() |
ಬೆಳಗಾವಿ; ದೃಶ್ಯ ಮಾದ್ಯಮಗ ಹೆಸರಿನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರ್ಬಳಕೆ ತಡೆಯುವ ಆಡಳಿತ, ಶಾಸಕಾಂಗ ಹಾಗೂ ಕಾರ್ಯಾಂಗದ ಜೊತೆಗೆ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಾನ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಿಗೆ ಮಸಿ ಬಳಿಯುವ ಕೆಲಸಗಳು ನಡೆದಿರುವುದು ಬಹಳ ನೋವಿನ ಸಂಗತಿ. ಯಾವುದೇ ಸುದ್ದಿ ವಿಚಾರದಲ್ಲಿ ಅಧಿಕಾರಿಗಳಿಂದ ಮಾಹಿತಿ, ಸ್ಪಷ್ಟನೆ ಪಡೆಯುವುದು ಅನಿವಾರ್ಯ. ಆದರೆ ಇದರ ದುರಪಯೋಗಪಡಿಸಿಕೊಂಡು ಹಣ ವಸೂಲಿ ವಂಧೆ ನಡೆಸುತ್ತಿರುವುದು ದುರಂತ, ದೃಶ್ಯ ಮಾಧ್ಯಮದವರೆಂದು ಹೇಳಿಕೊಂಡು ಹಫ್ತಾ ವಸೂಲಿ ಮಾಡಿ ಇಡೀ ಮಾದ್ಯಮ ಸಮುದಾಯ ಹೆಸರು ಹಾಳುಗೆಡುವುತ್ತಿದ್ದಾರೆ. ಈ ಕಾರಣಕ್ಕೆ ಇಲಾಖೆಗೆ ಹೋಗಿ ಯಾರಾದರೂ ವಿದ್ಯುನ್ಮಾನ ಮಾದ್ಯಮದ ಹೆಸರಿನಲ್ಲಿ ಕಿರುಕುಳ, ಹಣ ನೀಡುವಂತೆ ಕಿರಿಕಿರಿ ಕೊಟ್ಟರೆ ನೇರವಾಗಿ ದೂರು ನೀಡಲು ಸೂಚನೆ ನೀಡಬೇಕು. ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರ ಸೋಗಿನಲ್ಲಿ ಹಣ ವಸೂಲಿಗೆ ಇಳಿದಿರುವಂಥವರಿಗೆ ಕಡಿವಾಣ ಹಾಕಬೇಕು. ಇದಲ್ಲದೆ ಅನೇಕ ಕಡೆಗಳಲ್ಲಿ ಹಣಕಾಸಿನ ವ್ಯವಹಾರವೂ ನಡೆದಿದ್ದು, ಪತ್ರಕರ್ತರ ಹೆಸರಿನಲ್ಲಿಯೂ ಯಾರಿಗೂ ಲಂಚ ಕೊಡದಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂಬುದು ನಮ್ಮ ಮನವಿ.
ಅನೇಕ ಇಲಾಖೆಗಳ ಹಿರಿಯ ಅಧಿಕಾರಿಗಳು ಕಿರುಕುಳದ ಬಗ್ಗೆ ಈಗಾಗಲೇ ನಮ್ಮ ಸಂಘದ ಗಮನಕ್ಕೆ ತಂದಿದ್ದಾರೆ. ಅವರು ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಹಾಗಾಗಿ ಈ ವಿಚಾರವನ್ನು ತಾವು ಗಂಭೀರವಾಗಿ ಪರಿಗಣಿಸಬೇಕು. ಅಷ್ಟೇ ಅಲ್ಲ ಸುಗಮ, ಪಾರದರ್ಶಕ ಆಡಳಿತಕ್ಕೆ ತಾವು ಮುನ್ನಡಿ ಬರೆಯಬೇಕು. ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪತ್ರಕರ್ತರಿಗೆ ಕಳಂಕ ತರುವಂತಹ ಕೆಲಸಕ್ಕೆ ಕಡಿವಾಣ ಹಾಕಬೇಕು ಎಂಬುದು ನಮ್ಮ ಮನವಿ.
ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷರು ಶ್ರೀಕಾಂತ ವಾಯ್. ಕುಬಕಡ್ಡಿ ಅಧ್ಯಕ್ಷರು ಮಂಜುನಾಥ್ ಎಚ್. ಪಾಟೀ ಲ್ಉಪಾಧ್ಯಕ್ಷರು ಚಂದ್ರು ಎಚ್. ಶ್ರೀರಾಮಡುಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಜಿ.ಸಹದೇವ ವಾಯ್. ಮಾನೆ ಅಡಿವೆಪ್ಪ ಬಿ. ಪಾಟೀಲ ಸುಗಂಧಿಸಹ ಕಾರ್ಯದರ್ಶಿ ಪ್ರವೀಣ ಬಿ. ಶಿಂದೆಅನೀಲ ಎನ್. ಕಾಜಗಾರ. ಉಪಸ್ಥಿತರಿದ್ದರು.
![]() |
![]() |
![]() |
![]() |
![]() |